ಎಲ್ಲೆಲ್ಲೂ ಬೆಳಗುತ್ತಿದೆ ಕಾರ್ತಿಕ ದೀಪ!
Posted date: 27/November/2010

ಹಿರಿಯೂರು ರಾಘವೇಂದ್ರ ನಿರ್ದೇಶನದ ಕಾರ್ತಿಕ ದೀಪ ಐವತ್ತು ಕಂತುಗಳನ್ನು ಪೂರೈಸಿದೆ. ಉದಯವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಈ ಧಾರಾವಾಹಿಯಲ್ಲಿ ಧಾರ್ಮಿಕ ಕ್ಷೇತ್ರದ ಅನೇಕ ಕರಾಳ ಮುಖಗಳನ್ನು ಬಿಚ್ಚಿಡುತ್ತಿದೆ. ಜೊತೆಗೆ ಪ್ರತಿಭಾಪಲಾಯನ, ಸಂಸಾರಿಕ ಅಡೆತಡೆಗಳಿಗೆ ಸಮಾಜೀಕರಣದ ಛಾಯೆ, ಯುವಕರ ಕನಸಿಗೆ ಅಡ್ಡಗಾಲಾಗುತ್ತಿರುವ ಕುಟುಂಬ ವ್ಯವಸ್ಥೆ ಹೀಗೆ ಅನೇಕ ಸೂಕ್ಷ್ಮತೆಗಳನ್ನು ಕಥೆಯನ್ನಾಗಿಸಿರುವುದೇ ಜನಪ್ರಿಯತೆಗೆ ಕಾರಣ.
ಸಾಮಾನ್ಯವಾಗಿ ಮಧ್ಯಾಹ್ನದ ಧಾರಾವಾಹಿಗಳೆಂದರೆ ಅವುಗಳು ಕೌಟುಂಬಿಕ ಹಿನ್ನಲೆ ಅಥವಾ ಅನೈತಿಕ ಸಂಬಂಧಗಳ ಸುತ್ತ ಹೆಣೆದ ಕಥೆಗಳಾಗಿರುತ್ತಿದ್ದವು. ಆದರೆ, ಕಾರ್ತಿಕ ದೀಪವು ಹೊಸ ಶಕೆಯನ್ನು ಆರಂಭಿಸುವ ಮೂಲಕ ತನ್ನ ಜನಪ್ರಿಯತೆಯನ್ನು ಐವತ್ತು ಕಂತುಗಳಲ್ಲಿಯೇ ಸಾಬೀತು ಪಡಿಸಿದ್ದ ಅದರ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಹಿರಿಯ ಹಾಗೂ ಅನುಭವಿ ಕಲಾವಿದರುಗಳಾದ ಪೃಥ್ವಿರಾಜ್, ಶಮಾ, ಸುನೀಲ್ ಪುರಾಣಿಕ್, ಮಾಲತಿಶ್ರೀ ಮೈಸೂರು, ಚೇತನ್, ಶರಣ್ಯಾಶರಣು, ವಿಕ್ರಂ ಉದಯಕುಮಾರ್, ಗೋಕುಲಾನಂದ, ಗಿರೀಶ್, ವಿನುತಾ ಜೈನ್, ಆಶಾ ಜೋಯಿಸ್, ಶೀಲಾ, ವೀಣಾ ಕೃಷ್ಣ, ಸುಧಾ ಪ್ರಸನ್ನ ಮೊದಲಾದ ಕಲಾವಿದರಿರುವ ಕಾರ್ತಿಕ ದೀಪ ಧಾರಾವಾಹಿಯು ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ೩ ರಿಂದ ೩.೩೦ರವರೆಗೆ ಪ್ರಸಾರ ಕಾಣುತ್ತದೆ.
    ಶೇಷಗಿರಿ ಎಲಿಮೇಲಿ ಮತ್ತು ಪತ್ರಕರ್ತ ಶರಣು ಹುಲ್ಲೂರು ಕಥೆ-ಚಿತ್ರಕಥೆ- ಸಂಭಾಷಣೆಯನ್ನು ಒದಗಿಸಿದ್ದರೆ, ಮನೋರಂಜನ ಪ್ರಭಾಕರ್ ಅವರ ಸಂಗೀತವಿದೆ. ಶರಣು ಹುಲ್ಲೂರು ಅವರ ಶೀರ್ಷಿಕೆ ಗೀತೆಗೆ ನಂದಿತಾ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಎ.ರಾಜೇಂದ್ರನ್. ನಿರ್ಮಾಣ ನಿರ್ವಹಣೆ ಸುಧಾ ರಾಘವೇಂದ್ರ, ಸಂಕಲನ ಪಿ.ಜಿ.ಲಕ್ಷ್ಮೀಕಾಂತ್ ಅವರದ್ದು. ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಹಿರಿಯೂರು ರಾಘವೇಂದ್ರ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed